Tuesday, May 29, 2018

ಬದುಕು

ಬಿಳಿಯ ಹಾಳೆಯ ಮೇಲೆ
ಬಣ್ಣವಿಲ್ಲದ ಶಾಹಿಯನದ್ದಿ
ಬರೆದು ಕಳಿಸಿದ ಬ್ರಹ್ಮ
ಬದುಕಿನ ಮರ್ಮ

ಹಾಳೆಯನು ಹಿಡಿದು
ನಾಳೆಯನು ಹುಡುಕುತಲಿ
ಕಾಲವನು ಕಳೆದಿಹೆವು
ಮರೆತು ಇಂದಿನ ಧರ್ಮ
ಇಂದಿನೊಳು ನಾಳೆಯಿದೆ
ಮನದೊಳಗೆ ದಾರಿಯಿದೆ
ಫಲದ ಕನಸನು ತೊರೆದು
ಅನುದಿನವು ಸಾಗಿರಲಿ ನಮ್ಮಯಾ ಕರ್ಮ

No comments:

Post a Comment