ಬಿಳಿಯ ಹಾಳೆಯ ಮೇಲೆ
ಬಣ್ಣವಿಲ್ಲದ ಶಾಹಿಯನದ್ದಿ
ಬರೆದು ಕಳಿಸಿದ ಬ್ರಹ್ಮ
ಬದುಕಿನ ಮರ್ಮ
ಹಾಳೆಯನು ಹಿಡಿದು
ನಾಳೆಯನು ಹುಡುಕುತಲಿ
ಕಾಲವನು ಕಳೆದಿಹೆವು
ಮರೆತು ಇಂದಿನ ಧರ್ಮ
ಇಂದಿನೊಳು ನಾಳೆಯಿದೆ
ಮನದೊಳಗೆ ದಾರಿಯಿದೆ
ಫಲದ ಕನಸನು ತೊರೆದು
ಅನುದಿನವು ಸಾಗಿರಲಿ ನಮ್ಮಯಾ ಕರ್ಮ
No comments:
Post a Comment